ಮಹಾನ್ ದೇಶಭಕ್ತ ಸುಭಾಷ್ ಚಂದ್ರ
ಸುಭಾಷ್ ಚಂದ್ರ ಒಬ್ಬ ಮಹಾನ್ ಯೋಧನೂ ಹೌದು. ಮಹಾನ್ ದೇಶಭಕ್ತನೂ ಹೌದು. ಆದರೆ, ದೇಶದಲ್ಲಿ ದೇಶವನ್ನೆ ಮಾರುವವರೇ ಹೆಚ್ಚಾಗಿದ್ದಾರೆ. ಇದನ್ನ ನೋಡಿದ ಸುಭಾಷ್ ಚಂದ್ರ ಬೇಸರಗೊಳ್ಳುತ್ತಾನೆ. ಇಡೀ ದೇಶ ರಕ್ಷಣೆಗೆ ಯೋಧರು ಪ್ರಾಣವನ್ನೆ ಕೊಡ್ತಿದ್ದಾರೆ.
ಮಹೇಶ್ ಸುಖಧರೆ ದೇಶಭಕ್ತಿಯ ಸಿನಿಮಾ
ಆದರೆ, ಇಲ್ಲಿ ನೋಡಿದ್ರೆ ಏನೇನೋ ಆಗುತ್ತಿದೆ. ದೇಶವನ್ನ ಮಾರಲು ಅದೆಷ್ಟು ಜನ ಇದ್ದಾರೆ ಅನ್ನುವ ಸತ್ಯ ತಿಳಿದಾಗ ಸುಭಾಷ್ ಚಂದ್ರ ತುಂಬಾನೆ ನೊಂದುಕೊಳ್ತಾರೆ. ವಾಸಿಮ್ ಅಕ್ರಮ್ ಹೆಸರಿನ ಸಚಿವ ಇಡೀ ದೇಶವನ್ನ ಮಾರುತ್ತಿದ್ದಾನೆ ಅಂದಾಗ ಇನ್ನಷ್ಟು ದುಃಖ ಪಡ್ತಾರೆ.
ವಾಸಿಮ್ ಅಕ್ರಮ್-ಸುಭಾಷ್ ಚಂದ್ರ ಫೈಟ್
ಹೌದು, ಸಾರ್ವಭೌಮ ಚಿತ್ರದಲ್ಲಿ ವಾಸಿಮ್ ಅಕ್ರಮ್ ಮತ್ತು ಸುಭಾಷ್ ಚಂದ್ರ ಅವರ ಒಂದು ಪ್ರಮುಖ ದೃಶ್ಯವೊಂದಿದೆ. ಈ ಒಂದು ದೃಶ್ಯದಲ್ಲಿ ಇಡೀ ಚಿತ್ರದ ಪರಿಕಲ್ಪನೆ ಇದೆ. ಒಬ್ಬ ಮಾಜಿ ಯೋಧ ಸುಭಾಷ್ ಚಂದ್ರ, ಮತ್ತೊಬ್ಬ ಕಪಟಿ ರಾಜಕಾರಣಿ ವಾಸಿಮ್ ಅಕ್ರಮ್ ಇದ್ದಾನೆ. ಇವರ ನಡುವಿನ ಮಾತುಕತೆ ದೇಶದ ಅಸಲಿ ಚಿತ್ರವನ್ನೆ ಕಟ್ಟಿಕೊಡುತ್ತದೆ.
ವಾಸಿಮ್ ಅಕ್ರಮ್ ಹೇಳ್ತಾನೆ. 50 ವರ್ಷದ ಹಿಂದೆ ಪ್ರತಿ ಮನೆಯಲ್ಲೂ ಒಬ್ಬ ದೇಶಭಕ್ತ ಇದ್ದ. ದೇಶವನ್ನ ರಕ್ಷಿಸಲು ಜೀವ ಬಿಡುತ್ತಿದ್ದ. ಆದರೆ, ಈಗ ದೇಶದವನ್ನ ಮಾರೋಕೆ ಮನೆಗೆ ಒಬ್ಬರಿದ್ದಾರೆ. ಈ ಒಂದು ಮಾತನ್ನ ಕೇಳಿ ಸುಭಾಷ್ ಚಂದ್ರ ಹೇಳ್ತಾರೆ.

ಮಹಾನ್ ದೇಶಭಕ್ತ ಸುಭಾಷ್ ಚಂದ್ರ
ಎಲ್ಲವನ್ನೂ ಎದುರಿಸೋ ಧೈರ್ಯ ಇದೆ
ನಮ್ಮ ದೇಶದಲ್ಲಿ ಏನೂ ಬದಲಾಗಿಲ್ಲ. ಎಲ್ಲವೂ ಹಾಗೆ ಇದೆ. ಮೀರಸಾಧಿಕರನ್ನ ಹೊಡೆದು ಹಾಕುವ ಶಕ್ತಿ ಇದೆ. ಧೈರ್ಯ ಇದೆ. ಗುಂಡಿಗೆ ಇದೆ ಅಂತಲೇ ಹೇಳ್ತಾರೆ. ಆ ಮೇಲೆ ಸುಭಾಷ್ ಚಂದ್ರ ಹಾಗೂ ವಾಸಿಮ್ ಅಕ್ರಮ್ ನಡುವೆ ಫೈಟ್ ಆಗುತ್ತದೆ. ವಾಸಿಮ್ ಅಕ್ರಮ್ ನನ್ನ ಸುಭಾಷ್ ಚಂದ್ರ ಹೊಡೆದು ಹಾಕುತ್ತಾರೆ.
ಈ ರೀತಿಯ ದೃಶ್ಯದ ಬಳಿಕ ಸುಭಾಷ್ ಚಂದ್ರನ ಜೀವನದ ಕಥೆ ತೆರೆದುಕೊಳ್ಳುತ್ತದೆ. ಸೇನೆಯಲ್ಲಿಇದ್ದಾಗ ಹೇಗೆ ಪಾಕಿಸ್ತಾನಿಗಳ ಕೈಗೆ ಸಿಲುಕಿಕೊಂಡೇವು. ಜೈಲಿನಲ್ಲಿ ಯಾವ ರೀತಿ ಚಿತ್ರಹಿಂಸೆ ಕೊಡಲಾಗಿತ್ತು. ಆದರೂ ದೇಶದ ಬಗ್ಗೆ ಇರೋ ಪ್ರೇಮ ಕಡಿಮೆ ಆಗಲೇ ಇಲ್ಲ ಅನ್ನೋದನ್ನ ಸುಭಾಷ್ ಚಂದ್ರ ಹೇಳ್ತಾರೆ ಅಂತಲೇ ಹೇಳಬಹುದು.
ಮಹೇಶ್ ಸುಖಧರೆ ದೇಶಭಕ್ತಿಯ ಸಿನಿಮಾ
ಡೈರೆಕ್ಟರ್ ಮಹೇಶ್ ಸುಖಧರ್ ಅವರ ಚಿತ್ರದಲ್ಲಿ ದೇಶಭಕ್ತಿ ಕಥೆಗಳು ಇರುತ್ತವೆ. ಸೈನಿಕ ಚಿತ್ರದಲ್ಲೂ ಮಹೇಶ್ ಸುಖಧರ್ ಒಳ್ಳೆ ಕಥೆ ಹೇಳಿದ್ದರು. ಸೈನಿಕ ಜೀವನದಲ್ಲಿ ಆಗುವ ಹೃದಯ ಸ್ಪರ್ಶಿ ಕಥೆ ಹೇಳಿದ್ದರು. ಅದೇ ರೀತಿನೇ ಸಾರ್ವಭೌಮ ಚಿತ್ರದಲ್ಲೂ ವೀರಯೋಧನ ದೇಶಭಕ್ತಿಯ ಕಥೆ ಹೇಳಿದ್ದಾರೆ.
ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಡಬಲ್ ರೋಲ್ ಮಾಡಿದ್ದಾರೆ. ಹಾಗೇನೆ ಶಿವರಾಜ್ ಕುಮಾರ್ ತಮ್ಮ ಚಿತ್ರ ಜೀವನದಲ್ಲಿ ಈ ಚಿತ್ರಕ್ಕೂ ಅಷ್ಟೆ ಮಹತ್ವ ಕೊಟ್ಟಿದ್ದಾರೆ. ಈ ಸಿನಿಮಾ ಬಂದ್ಮೇಲೆ ಶಿವಣ್ಣ, ಮಾಸ್ ಲೀಡರ್ ಚಿತ್ರದಲ್ಲಿ ಆರ್ಮಿ ಆಫೀಸರ್ ಆಗಿಯೇ ನಟಿಸಿದ್ದಾರೆ. ಅಪ್ಪು ಅಭಿನಯದ ಜೇಮ್ಸ್ ಚಿತ್ರದಲ್ಲೂ ವೀರಯೋಧನಾಗಿಯೇ ಅಭಿನಯಿಸಿದ್ದಾರೆ ಅಂತಲೇ ಹೇಳಬಹುದು.
Bangalore [Bangalore],Bangalore,Karnataka
June 08, 2025 7:13 PM IST