Press "Enter" to skip to content

Karnataka Rains: ರಾಜ್ಯದ 20ಕ್ಕೂ ಅಧಿಕ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ, ಹವಾಮಾನ ಮುನ್ಸೂಚನೆ | IMD Prediction More Than 20 Districts of state Face Heavy Rain From June 12th

Karnataka

oi-Shankrappa Parangi

Google Oneindia Kannada News


ಬೆಂಗಳೂರು,
ಜೂನ್
09:

ಕರ್ನಾಟಕದಾದ್ಯಂತ
ಮಳೆ
ಕಡಿಮೆಯಾಗಿ
ಬಿಸಿಲಿನ
ಪ್ರಮಾಣ
ಹೆಚ್ಚಾಗಿತ್ತು.
ಇದೀಗ
ಮುಂದಿನ
5ರಿಂದ
7ದಿನ
ರಾಜ್ಯದ
ಬಹುತೇಕ
ಎಲ್ಲ
ಜಿಲ್ಲೆಗಳಲ್ಲಿ
ಬಿರುಗಾಳಿ
ಸಹಿತ
ಭಾರೀಯಿಂದ
ಅತೀ
ಭಾರೀ
ಮಳೆ
ಆಗಲಿದೆ.
ಕನಿಷ್ಠ
110
ಮಿಲಿ
ಮೀಟರ್‌ನಿಂದ
200
ಮಿಲಿ
ಮೀಟರ್‌ವರೆಗೆ
ಮಳೆ
ಆಗುವ
ನಿರೀಕ್ಷೆ
ಹಿನ್ನೆಲೆ
ವಿವಿಧ
ಜಿಲ್ಲೆಗಳಿಗೆ
‘ಆರೆಂಜ್
ಮತ್ತು
ಯೆಲ್ಲೋ
ಅಲರ್ಟ್’
ಘೋಷಿಸಲಾಗಿದೆ.
ಮತ್ತೊಂದು
ಬಾರಿ
ಮುಂಗಾರು
ಮಳೆ
ಅಬ್ಬರಿಸುವುದು
ಖಚಿತ
ಎಂದು
ಭಾರತೀಯ
ಹವಾಮಾನ
ಇಲಾಖೆಯು
(IMD)
ಮುನ್ಸೂಚನೆ
ನೀಡಿದೆ.

ರಾಜ್ಯದಲ್ಲಿ
ಭಾನುವಾರ
ಅಲ್ಲಲ್ಲಿ
ಹಗುರ
ಮಳೆ
ಆಗಿದೆ.
ಜೂನ್
11
ರಿಂದ
ಧಾರಾಕಾರ
ಮಳೆ
ಆರಂಭವಾದರೂ
ಅಂದು
ನಾಲ್ಕು
ಜಿಲ್ಲೆಗಳಲ್ಲಿ
ಮಾತ್ರ
ಭಾರೀ
ಮಳೆ
ಇದ್ದು,
ಯೆಲ್ಲೋ
ಅಲರ್ಟ್
ನೀಡಲಾಗಿದೆ.
ಅದರ
ಹೊರತು
ಎಲ್ಲಿಯೂ
ಅಷ್ಟಾಗಿ
ಮಳೆ
ಬಾರದು.
ಜೂನ್
12ರಂದು
ಎಲ್ಲಿಯೂ
ಮಳೆ
ಮುನ್ಸೂಚನೆ
ಇಲ್ಲ.
ಅಲ್ಲಿಯವರೆಗೆ
ಹಗುರ,
ತುಂತುರು
ಮಳೆ
ಬರುವ
ಮುನ್ಸೂಚನೆ
ಇದೆ
ಎಂದು
ಐಎಂಡಿ
ತಿಳಿಸಿದೆ.

IMD Prediction More Than 20 Districts of state Face Heavy Rain From June 12th

ಜೂನ್
13
ರಿಂದ
ಮೂರು
ದಿನ
(ಜೂನ್
15ರವರೆಗೆ)
ರಾಜ್ಯದ
ಕರಾವಳಿ,
ಒಳನಾಡು,
ಮಲೆನಾಡು
ಸೇರಿದಂತೆ
ಒಟ್ಟು
20
ಕ್ಕೂ
ಹೆಚ್ಚು
ಜಿಲ್ಲೆಗಳಲ್ಲಿ
ಬಿರುಗಾಳಿ
ಸಹಿತ
ಮಳೆ
ಆರ್ಭಟ
ಕಂಡು
ಬರಲಿದೆ.
ಇದರಿಂದ
ಕನಿಷ್ಠ
110
ಮಿಲಿ
ಮೀಟರ್
ಹಾಗೂ
ಗರಿಷ್ಠ
200
ಮಿಲಿ
ಮೀಟರ್‌ವರೆಗೆ
ಮಳೆಗೆ
ಸಾಕ್ಷಿ
ಆಗುವ
ಜಿಲ್ಲೆಗಳು
ಸೇರಿದಂತೆ
ಎಂದು
ಐಎಂಡಿ
ಮುನ್ಸೂಚನೆ
ವರದಿ
ಅಪ್ಡೇಟ್ಸ್
ನೀಡಿದೆ.

ಯಾವ್ಯಾವ
ಜಿಲ್ಲೆಗಳಿಗೆ
ಭಾರೀ
ಮಳೆ
ಎಚ್ಚರಿಕೆ?

ಕರಾವಳಿಯ
ಉಡುಪಿ
ಉತ್ತರ
ಕನ್ನಡ
ಹಾಗೂ
ದಕ್ಷಿಣ
ಕನ್ನಡ
ಜಿಲ್ಲೆಗಳಲ್ಲಿ
ಮರೆಯಾಗಿದ್ದ
ಮುಂಗಾರು
ಜೂನ್
13ರಿಂದ
ಮೂರು
ದಿನ
ಧಾರಾಕಾರವಾಗಿ
ನಿರಂತರವಾಗಿ
ಸುರಿಯಲಿದೆ.
ಹೀಗಾಗಿ
ಮೊದಲ
ಎರಡು
ದಿನ
ಯೆಲ್ಲೋ
ಅಲರ್ಟ್
ನಂತರ
ಒಂದು
ದಿನ
ಆರೆಂಜ್‌
ಅಲರ್ಟ್
ನೀಡಲಾಗಿದೆ.

ಒಳನಾಡು
ಜಿಲ್ಲೆಗಳಾದ
ಬೆಳಗಾವಿ,
ಬೀದರ್,
ಧಾರವಾಡ,
ಗದಗ,
ಕಲಬುರಗಿ,
ವಿಜಯಪುರ,
ಹಾವೇರಿ,
ಬಳ್ಳಾರಿ,
ಚಿಕ್ಕಮಗಳೂರು,
ದಾವಣಗೆರೆ,
ಹಾಸನ,
ಕೊಡಗು,
ಮೈಸೂರು,
ಶಿವಮೊಗ್ಗ,
ವಿಜಯನಗರ
ಸೇರಿದಂತೆ
ಹಲವು
ಜಿಲ್ಲೆಗಳಲ್ಲಿ
110
ಮಿಲಿ
ಮೀಟರ್‌ಗಿಂತಲೂ
ಹೆಚ್ಚಿನ
ಮಳೆ
ಆಗಲಿದೆ.

ಜಿಲ್ಲೆಗಳಿಗೆ
ಒಂದು
ದಿನ
ಆರೆಂಜ್
ಅಲರ್ಟ್,
ಎರಡು
ದಿನ
ಯೆಲ್ಲೋ
ಅಲರ್ಟ್
ನೀಡಲಾಗಿದೆ
ಎಂದು
ಹವಾಮಾನ
ಇಲಾಖೆ
ತಿಳಿಸಿದೆ.


ಒಳನಾಡು
ಭಾಗಗಳಲ್ಲಿನ
ತಾಪಮಾನ
ಕಡಿಮೆಯಾಗಿ
ಮಳೆಗಾಲದ
ವಾತಾವರಣ
ಸೃಷ್ಟಿಯಾಗಲಿದೆ.
ಉತ್ತರ
ಕರ್ನಾಟಕದಲ್ಲಿ
ಮುಂಗಾರು
ಹಂಗಾಮು
ಬಿತ್ತನೆ
ಮಾಡಿದ್ದ
ರೈತರಿಗೆ
ಮಳೆ
ಅಗತ್ಯವಿದೆ.
ಮುಂದಿನ
ವಾರದ
ಮಳೆ
ಅವರ
ಮೊಗದಲ್ಲಿ
ಮಂದಹಾಸ
ಮೂಡಿಸಲಿದೆ.

Source link