Last Updated:
ಧಾರವಾಡದಲ್ಲಿ ಮಾದಕ ವ್ಯಸನ ತ್ಯಜಿಸಿ, ಆರೋಗ್ಯ ಹೆಚ್ಚಿಸಲು, ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರಿ, ಸೀಟ್ ಬೆಲ್ಟ್ ಧರಿಸಿ, ಧೂಮಪಾನ ತ್ಯಜಿಸಿ ಎಂಬ ಘೋಷ ವಾಕ್ಯಗಳೊಂದಿಗೆ ವಿದ್ಯಾರ್ಥಿಗಳು ಜಾಗೃತಿ ಮೂಡಿಸಿದರು.
ಧಾರವಾಡ: ಮಾದಕ ವ್ಯಸನ ತ್ಯಜಿಸಿ, ಆರೋಗ್ಯ (Health) ಹೆಚ್ಚಿಸಿ,ವಾಹನ ಚಾಲನೆ ಮಾಡುವಾಗ ಮೊಬೈಲ್ (Mobile) ಬಳಸದಿರಿ, ಡ್ರೈವಿಂಗ್ ಮಾಡುವಾಗ ಸಿಲ್ಟ್ ಬೆಲ್ಟ್ ಧರಿಸಿ, ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ, ಧೂಮಪಾನ ತ್ಯಜಿಸಿ, ಇನ್ನಿತರೆ ದುಶ್ಚಟ ಹಾಗೂ ದುರಾಭ್ಯಾಸದಿಂದ ದೂರವಿರಿ, ಸುಖ ಜೀವನದತ್ತ (Life) ಮನಸ್ಸು ಕೊಡಿ,ಇಂತಹ ಹಲವು ಘೋಷ ವಾಕ್ಯಗಳ ಫಲಕ ಗಳನ್ನಿಡಿದು ಧಾರವಾಡ ಶಾಲಾ,ಕಾಲೇಜು ವಿದ್ಯಾರ್ಥಿಗಳು (Students) ಮಾದಕ ವಸ್ತುಗಳ ದುಷ್ಪರಿಣಾಮದ ಭೀಕರತೆಯನ್ನು ಅನಾವರಣಗೊಳಿಸಿದರು.
ಧಾರವಾಡದಲ್ಲಿ ಪೊಲೀಸ್ ಜಾಗೃತಿ ಕಾರ್ಯಕ್ರಮ
ಹೌದು, ಮಾದಕ ದ್ರವ್ಯ ಸೇವನೆ ಹಾಗೂ ಸಾಗಾಣಿಕೆ ನಿಷೇಧ ಅಭಿಯಾನದ ಜಾಗೃತಿ ಬಗ್ಗೆ ಪೊಲೀಸ್ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳು ಜಾಗೃತಿ ಮೂಡಿಸುವ ಕೆಲಸ ಸದಾ ಮಾಡುತ್ತಾನೆ ಇರುತ್ತದೆ. ಆದರೂ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಜಾಗೃತಿಗಾಗಿ ಪೊಲೀಸ್ ಇಲಾಖೆಯು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಸಾರ್ವಜನಿಕರಿಗೆ ತಿಳುವಳಿಕೆ ಕಾರ್ಯಕ್ರಮಗಳು ಹಮ್ಮಿಕೊಂಡಿತ್ತು.
ಹುಬ್ಬಳ್ಳಿ -ಧಾರವಾಡ ಪೊಲೀಸ್ ಕಮಿಷನರೇಟ್ ಧಾರವಾಡದ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಅವರು ಕಾಲೇಜು ವಿದ್ಯಾರ್ಥಿಗಳಿಗೆ ದುಶ್ಚಟಗಳಿಂದ ದೂರವಿರುವಂತೆ ಹಾಗೂ ಸಂಚಾರದ ಕುರಿತು ಜಾಗೃತಿ ಸಂದೇಶ ನೀಡಿದರು.
ಸುಖ ಜೀವನಕ್ಕೆ ಮಾದಕ ವ್ಯಸನ ತ್ಯಜಿಸಿ
ನಗರದ ವಿವಿಧ ಶಾಲಾ ವಿದ್ಯಾರ್ಥಿಗಳು ಫಲಕಗಳನ್ನು ಹಿಡಿದು, ಸಿಬಿಟಿ, ಜುಬ್ಲಿ ವೃತ್ತ, ಸುಭಾಸ ನಗರ, ಕೆಸಿಡಿ ವೃತ್ತ ಸೇರಿದಂತೆ ವಿವಿಧ ಕಡೆ ರಸ್ತೆಗಳಲ್ಲಿ ಸಂಚರಿಸಿದ ಜಾಥಾವು ಮತ್ತೆ ಕಾಲೇಜು ಆವರಣ ತಲುಪಿತು. ಮದ್ಯಪಾನ ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಭಾರತದಲ್ಲಿ ಯುವ ಜನತೆ ಆರೋಗ್ಯ ಹದಗೆಡುತ್ತಿದೆ. ವಾಹನ ಸಂಚಾರದ ಸಮಯದಲ್ಲಿ ರಸ್ತೆ ಅಪಘಾತ ಗಳು ಶೇಕಡಾ 33ರಷ್ಟು ಮದ್ಯಪಾನ ಸೇವನೆ ಕಾರಣದಿಂದ ಸಂಭವಿಸುತ್ತಿವೆ.
ಮಕ್ಕಳು ಮೇಲೆ ದೌರ್ಜನ್ಯ ಪ್ರಕರಣಗಳು ಮದ್ಯವ್ಯಸನದ ಪರಿಣಾಮದಿಂದ ನಡೆಯುತ್ತಿದೆ. ಮಾದಕ ವಸ್ತುಗಳ ವ್ಯಸನದಿಂದ ಆಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವಿನ ಕೊರತೆ ಯುವ ಜನಾಂಗದಲ್ಲಿ ಇದೆ. ಆದ್ದರಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಮಾದಕ ವಸ್ತುಗಳ ಸೇವನೆಯಿಂದ ಮತ್ತು ಅಕ್ರಮ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಗುರಿಯಾಗಬೇಕಿದೆ ಎಂದು ತಿಳಿಸಿದರು.
Dharwad,Karnataka
June 19, 2025 11:47 AM IST